Latest News


Warning: Trying to access array offset on value of type bool in /home/u672248591/domains/kadambakesari.com/public_html/wp-content/themes/bingo/includes/action.php on line 305

Warning: Trying to access array offset on value of type bool in /home/u672248591/domains/kadambakesari.com/public_html/wp-content/themes/bingo/includes/action.php on line 305

Warning: Trying to access array offset on value of type bool in /home/u672248591/domains/kadambakesari.com/public_html/wp-content/themes/bingo/includes/action.php on line 305

Warning: Trying to access array offset on value of type bool in /home/u672248591/domains/kadambakesari.com/public_html/wp-content/themes/bingo/includes/action.php on line 305

Warning: Trying to access array offset on value of type bool in /home/u672248591/domains/kadambakesari.com/public_html/wp-content/themes/bingo/includes/action.php on line 305

Warning: Trying to access array offset on value of type bool in /home/u672248591/domains/kadambakesari.com/public_html/wp-content/themes/bingo/includes/action.php on line 305

Warning: Trying to access array offset on value of type bool in /home/u672248591/domains/kadambakesari.com/public_html/wp-content/themes/bingo/includes/action.php on line 305

Warning: Trying to access array offset on value of type bool in /home/u672248591/domains/kadambakesari.com/public_html/wp-content/themes/bingo/includes/action.php on line 305

Warning: Trying to access array offset on value of type bool in /home/u672248591/domains/kadambakesari.com/public_html/wp-content/themes/bingo/includes/action.php on line 305

Warning: Trying to access array offset on value of type bool in /home/u672248591/domains/kadambakesari.com/public_html/wp-content/themes/bingo/includes/action.php on line 305

ಜಗದೊಡತಿ ಚಾಮಾಯಿ – ನಾಡ ದೇವತೆ ಚಾಮುಂಡಿ

ಕನ್ನಡಿಗರ ಹಿರಿ ದೈವವಾಗಿ, ಮೈಸೂರು ಸಂಸ್ಥಾನದ ಕುಲ ದೇವತೆಯಾದ ಈ ಮಹಾ ತಾಯಿಯ ಚಾರಿತ್ಯ ಅಮೋಘ, ಅದ್ಬುತ ಮತ್ತು ಪರಮ ಪುಣ್ಯದಾಯಕ. ಲೋಕ ಕಂಟಕನಾದ ಮಹಿಷಾಸುರ ಋಷಿ, ಮುನಿಗಳಿಗೆ, ಮಾನವರಾದಿಯಾಗಿ ದೇವನು ದೇವತೆಗಳಿಗೂ ಕಂಟಕನಾಗಿ ಮೂರು ಲೋಕಗಳನ್ನು ತನ್ನ ಮುಷ್ಟಿಯಲ್ಲಿ ಹಿಡಿದು ಮಹಿಷೂರು ಎಂಬ ಪಟ್ಟಣದಿಂದ ಎಲ್ಲವನ್ನು ನಿಯಂತ್ರಿಸುತ್ತಿದಾಗ, ಋಷಿ, ಮುನಿಗಳಾದಿಯಾಗಿ ಜಗನ್ಮಾತೆಯ ಆಶ್ರಯ ಪಡೆಯಲು ಪ್ರಾರ್ಥಿಸಿದವರಾಗಿ, ಜಗತ್ಜನನಿ ತನ್ನ ಸರ್ವ ಶಕ್ತಿಗಳನ್ನು ಒಗ್ಗೂಡಿಸಿ ಚೆಂಡಿ ಚಾಮುಂಡಿಯಾಗಿ ಚಂಡ ಮುಂಡರಾದಿಯಾಗಿ ಸಾಗರೋಪಾದಿಯಾಗಿ ಬಂದ ಮಹಿಷಾಸುರನ ಬಂಟರನ್ನು ಮತ್ತು ಕೊನೆಯಲ್ಲಿ ಮಹಿಷಾಸುರನನ್ನು ಸಂಹರಿಸಿ ಲೋಕಕ್ಕೆ ಮತ್ತೊಮ್ಮೆ ಶಾಂತಿಯನ್ನು ಪ್ರಸಾದಿಸಿದಳು, ಇಂತಹ ರಣ ರೋಚಕ ಘಟನೆಗಳಿಗೆ ಸಾಕ್ಷಿ ಆಗಿದ್ದು ಮಹಿಷೂರು ಅನಿಸಿಕೊಂಡ ಈಗಿನ ನಮ್ಮ ಮೈಸೂರು, ಇದೆ ಬೆಟ್ಟದ ಮೇಲೆ ತಾಯಿ ಮಹಿಷಾಸುರನನ್ನು ಮತ್ತು ಅವನ ಬಂಟರನ್ನು ಸಂಹರಿಸಿದ್ದು. ಇದು ಒಂದು ಭಾಗ ಎನಿಸಿದರೆ ನಂತರದ ದಿನಗಳಲ್ಲಿ ಇಲ್ಲಿ ಪರಮೇಶ್ವರ...
Latest News

ಕೃಷ್ಣರಾಜರು ಆಳಿದ ಕಾಲದಲ್ಲಿ ಅದು ಅಕ್ಷರಶಃ ರಾಮ ರಾಜ್ಯವೇ

ನಾಡಾಳಿದ ಮಹಾಸ್ವಾಮಿ ಶ್ರೀಮನ್ ಮಹೀಶೂರ ಸಂಸ್ಥಾನ ಪುರವರಾಧೀಶ ಕರ್ನಾಟಕ ಜನತೆಯ ಹೃದಯ ಸಿಂಹಾಸನಾಧೀಶ್ವರ ಶ್ರೀಮನ್ ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ನಮ್ಮ ನಾಡು ಕಂಡ ಒಬ್ಬ ಶ್ರೇಷ್ಠ ಮಹಾ ರಾಜಾ, ಇವರು ನಮ್ಮ ನಾಡನ್ನು ಆಳಿದ ಕಾಲದಲ್ಲಿ ಅದು ಅಕ್ಷರಶಃ ರಾಮ ರಾಜ್ಯವೇ. ಬ್ರಿಟಿಷ್ ಆಡಳಿತವಿದ್ದ ಕಾಲ ಅದು, ಸ್ವತಂತ್ರವಾಗಿ ರಾಜ್ಯಾಡಳಿತ ನೆಡೆಸಲಾಗದ ಕಾಲಮಾನದಲ್ಲಿ, ಬ್ರಿಟಿಷ್ ಸರ್ಕಾರವನ್ನು ತಮ್ಮ ಸಹನೆ, ಸಂಯಮ, ತಾಳ್ಮೆ, ಬುದ್ಧಿವಂತಿಕೆಯಿಂದ ತಾವುಗಳು ಮಾಡುತ್ತಿದ್ದ ಜನ ಪರ ಕಾರ್ಯಗಳಿಗೆ ಸಹಕಾರ ಪಡೆಯುತ್ತಿದ್ದರು. ತಮಗೆ ಸಿಗಬೇಕಾದ ರಾಜ ಮರ್ಯಾದೆ ಬ್ರಿಟಿಷ್ ಕುನ್ನಿಗಳು ನೀಡದೆ ಹೋದರು, ಜನ ಪರ ಕಾರ್ಯಕ್ರಮಗಳು ನಿಲ್ಲಬಾರದು, ಪ್ರಜೆಗಳಿಗೆ ರಾಜರ ಪ್ರತಿಷ್ಠೆ ಮುಳ್ಳಾಗ ಬಾರದು ಎಂದು ಅರಿತ ಪ್ರಭುಗಳು, ತಮ್ಮ ಬುದ್ಧಿವಂತಿಕೆ, ಕಾರ್ಯ ವೈಖರಿ, ಮತ್ತು ಸದಾ ಜನ ಪರ ಕಾಳಜಿಯಿಂದ ನಮಗೆ ಬೇಕಾದ ಸವಲತ್ತುಗಳನ್ನು ಕೊಟ್ಟು ನಮಗೆಲ್ಲಾ ದೇವರಾದದ್ದು ನಾವು...
Latest News

ಸರಿಯಾದ ಹೆಜ್ಜೆ ಹಾಕಿ ಸ್ಥಾನ ಪಡೆದಿದ್ದು…

ಆಗಸ್ಟ್ 15, ಜನವರಿ 26 ಬರತ್ತೆ ಅಂದರೆ ಶಾಲೆಯಲ್ಲಿ ಬ್ಯಾಂಡ್, ಪಥಸಂಚಲನಕ್ಕೆ ತಂಡಗಳ ತಯಾರಿ, ಅಭ್ಯಾಸ ಆರಂಭ ಆಗತ್ತೆ. ಮಧ್ಯಾಹ್ನ ಬೇಗ ಊಟ ಮುಗಿಸಿ ಮಕ್ಕಳು ಅಭ್ಯಾಸಕ್ಕೆ ಬರೋರು, ಕೆಲವರಂತೂ ಗಡಿಬಿಡಿಲಿ ಊಟ ಮುಗಿಸಿದ್ರೆ ಇನ್ನೂ ಕೆಲವರು ಅಭ್ಯಾಸ ಮುಗಿಸಿ ಬೆಲ್ ಆದಮೇಲೆ ಓಡಿ ಬರೋರು. ಜಿಲ್ಲಾಡಳಿತದಿಂದ ನಡೆಯುವ ಈ ಕಾರ್ಯಕ್ರಮದ ಅಭ್ಯಾಸಕ್ಕೆ ಅಂತ ನಾಲ್ಕುದಿನ ಮುಂಚೆ ಬೆಳಗ್ಗೆ ಡಿ.ಎ.ಆರ್ ಮೈದಾನಕ್ಕೆ ಹೋಗಬೇಕಿರತ್ತೆ. ಪ್ರತಿಬಾರಿಯಂತೆ ಈ ಬಾರಿಯೂ ನಮ್ಮ ಶಾಲೆಯಿಂದ ಹುಡುಗರು ಮತ್ತು ಹುಡುಗಿಯರ ಒಂದೊಂದು ತಂಡಗಳು ಸಿದ್ದವಾಗಿತ್ತು. ಬೆಳಗ್ಗೆ ಬೇಗ ಎದ್ದು ಬಂದ ಮಕ್ಕಳು ಮೈದಾನದಲ್ಲಿ ಅಭ್ಯಾಸ ಮಾಡ್ತಾ ಇದ್ರು, ಇನ್ನೂ ಕೆಲವರು ಅತ್ತೆಯ ಮನೆಗೆ ಬರೋ ಹಾಗೆ ನಿಧಾನವಾಗಿ ಬರ್ತಾನೇ ಇದ್ರು. ಪೊಲೀಸ್, ಹೋಮ್ ಗಾರ್ಡ್ಸ್, ಎನ್.ಸಿ.ಸಿ. ಸ್ಕೌಟ್ಸ್-ಗೈಡ್ ಜೊತೆಗೆ ವಿವಿಧ ಶಾಲೆಯ ಒಟ್ಟು ಸರಿಸುಮಾರು 25ಕ್ಕೂ ಹೆಚ್ಚಿನ ತುಕಡಿಗಳು ಇದ್ದವು. ಈಬಾರಿ ಪಥಸಂಚಲನದ...

ನಮ್ಮ ಕೃಷ್ಣರಾಜರನ್ನೇ ನಾವು ಮರೆತೆವು

ಶಿವಾಜಿ ಮಹಾರಾಜರನ್ನು ನಾವು ಕನ್ನಡಿಗರು ಗೌರವಿಸುತ್ತೀವಿ, ಆರಾಧಿಸುತ್ತೀವಿ ಅಂದ್ರೆ ಅದು ನನ್ನ ಕನ್ನಡ ಸಂಸ್ಕೃತಿ ಕಲಿಸಿ ಕೊಟ್ಟ ಸಂಸ್ಕಾರದ ಫಲ. ಆದರೆ ಪಕ್ಕದ ಶಿವಾಜಿ ಮಹಾರಾಜರನ್ನು ಗೌರವಿಸುವ ಆತುರದಲ್ಲಿ ನಮ್ಮ ಕೃಷ್ಣರಾಜರನ್ನೇ ನಾವು ಮರೆತೆವು. ನಾವು ನಮ್ಮ ಮುಂದಿನ ಪೀಳಿಗೆಗೆ ಇಂತ ಒಬ್ಬ ದೊರೆ ಇದ್ದರು, ಅವರ ನೆರಳಿನಲ್ಲಿ ನಾವು ಎಂದೆಂದಿಗೂ ಜೀವಿಸುತ್ತ ಇರುತ್ತೀವಿ ಎಂಬ ಸತ್ಯ ಪರಿಚಯ ಮಾಡಿಕೊಟ್ಟರೆ ಮಾತ್ರವೇ ನಮ್ಮ ಪರಂಪರೆ, ಇತಿಹಾಸ ಮತ್ತು ಕನ್ನಡ ಅಸ್ಮಿತೆಯನ್ನು ಉಳಿಸಿಕೊಳ್ಳಲು ಸಾಧ್ಯ ಆಗುತ್ತದೆ. ಆಗಾಗಿ ಈ ಮಹಾನ್ ರಾಜಋಷಿಯ ಸಾಧನೆ ಬಗ್ಗೆ ಪ್ರತಿ ದಿನ ಒಂದು ಸಂಚಿಕೆ ಮಾಡುವೆ, ಎಲ್ಲಿ ತನಕ ಈ ಮಹಾನ್ ಪುರುಷ ಕನ್ನಡದ ಮನ ಮತ್ತು ಹೃದಯ ತುಂಬಿಕೊಳ್ಳುವರೋ ಅಲ್ಲಿ ತನಕ ಇವರ ಪರಿಚಯ ಮಾಡುವೆ. ಇದು ಕನ್ನಡ ಭಾಷೆ, ಸಂಸ್ಕೃತಿ ಮತ್ತು ಪರಂಪರೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ನಿಮ್ಮಂತ ಒಬ್ಬ...
Latest News

“ಪುಸ್ತಕದಲ್ಲಿ ಬರೆದ ಹೋಂವರ್ಕ್ ಪತ್ರಿಕೆಯಲ್ಲಿ!?”

ಶಿಕ್ಷಕರು ಎಂದರೆ ಕೇವಲ ಕಲಿಸುವವರು ಎಂಬುದು ಮಾತ್ರವಲ್ಲ ಕೆಲವೊಮ್ಮೆ ವಿದ್ಯಾರ್ಥಿಗಳಿಂದ ಕಲಿಯುವುದು ಸಹ ಇದೆ. ಎಂಬುದನ್ನು ನನಗೆ ಚೆನ್ನಾಗಿ ಅರಿವು ಮೂಡಿಸಿದ್ದು ನನ್ನ ವಿದ್ಯಾರ್ಥಿನಿ ‘ಖುಷಿನವೀನ್’ ನಾನು ೯ನೇ ತರಗತಿಯಲ್ಲಿ ಕನ್ನಡ ತೃತೀಯ ಭಾಷೆಯ ಶಿಕ್ಷಕನಾಗಿದ್ದಾಗ, ಸುಧಾಮೂರ್ತಿ ಅವರ ‘ಮನದ ಮಾತು’ ಕೃತಿಯಿಂದ ಆಯ್ದ ‘ಸಂತೋಷದ ಒಳಗುಟ್ಟು’ ಎಂಬ ಪಾಠವಿತ್ತು. ಅದರ ವಿಷಯ ಎಲ್ಲಾ ಇದ್ದೂ ಏನು ಇಲ್ಲ ಎಂದು ಕೊರಗುವ ಶ್ರೀಮಂತ, ಇರುವುದರಲ್ಲೇ ಸಂತೋಷ ಕಂಡುಕೊಂಡ ಜೀವನ ನಡೆಸುವ ಮನೆಕೆಲಸದಾಕೆ. ಇದರ ಮಧ್ಯೆ ಶ್ರೀಮಂತ ವರ್ಗದಲ್ಲಿ ಮಗನ ಮೇಲೆ ೧೦೦% ಫಲಿತಾಂಶ ಬರಲೇಬೇಕು ಎಂಬ ಅತಿಯಾದ ಒತ್ತಡ. ಇವುಗಳನ್ನು ಮಕ್ಕಳ ಮಧ್ಯೆ ಚರ್ಚಿಸಲು ಒಂದು ವೇದಿಕೆಯನ್ನು ತಯಾರು ಮಾಡಬೇಕೆಂದುಕೊAಡು ತರಗತಿಯಲ್ಲಿ ಮಕ್ಕಳಿಗೆ ಮತ್ತೊಂದು ಕೆಲಸ. ‘ಪೋಷಕರು ಮಕ್ಕಳ ಮೇಲೆ ಒತ್ತಡವನ್ನು ಹೇರುವುದು ಎಷ್ಟರ ಮಟ್ಟಿಗೆ ಸರಿ? ಎಂಬ ವಿಷಯದ ಬಗ್ಗೆ ಒಂದು ಪುಟ ಬರೆದುಕೊಂಡು ಬರಬಹುದಾ?’...
Latest News

“ಪ್ರಪಂಚದ ಪ್ರಾಚೀನ ಭಾಷೆ ನಮ್ಮ ಕನ್ನಡ”

ಕನ್ನಡ ಪ್ರಪಂಚದ ಆಡುಭಾಷೆಗಳಲ್ಲಿ ಅತ್ಯಂತ ಸುಮಧುರ, ಸುಲಲಿತವಾದ ಭಾಷೆ. ಕನ್ನಡವು "ಸುಲಿದ ಬಾಳೆಹಣ್ಣಿನಂತೆ, ರಸಭರಿತ ಕಬ್ಬಿನಂತೆ" ಎಂದು ಕವಿಗಳು ಹೇಳಿದ್ದಾರೆ. ಎಂದರೆ ಅದು ಸುಲಿದ ಬಾಳೆಹಣ್ಣಿನಷ್ಟು ಸುಲಲಿತ ಎಂಬುದನ್ನು ಕಾಣಬಹುದು. ಪ್ರಪಂಚದ ಹಳೆಯ ಭಾಷೆಗಳಲ್ಲಿ ಕನ್ನಡವೂ ಸಹ ಒಂದು. ಭಾರತದ ಪುರಾತನ ಭಾಷೆಗಳ ಸಾಲಿನಲ್ಲಿ ಕನ್ನಡ ಅಗ್ರಸ್ಥಾನ ಪಡೆದುಕೊಂಡಿದೆ. "ಕನ್ನಡ ಎನೆ ಕುಣಿದಾಡುವುದೆನ್ನೆದೆ ಕನ್ನಡ ಎನೆ ಕಿವಿ ನಿಮಿರುವುದು ಕಾಮನಬಿಲ್ಲನು ಕಾಣುವ ಮೈದೊಡೆ ತಕ್ಕನೆ ಮನ ಮೈ ನಿಮಿರುವುದು" ಕವಿ ಪಂಚ ಮಂಗೇಶರಾಯರ ವಾಕ್ಯವಿದು. ಕನ್ನಡವೆಂದರೆ ಕುಣಿದಾಡುವ, ಕಿವಿ ನಿಮಿರುವ ಭಾಷೆ ಕಾಮನಬಿಲ್ಲಲ್ಲು ಸಹ ಕರ್ನಾಟಕದ ಬಣ್ಣವಿದೆ. ಪ್ರಕೃತಿಯೂ ಸಹ ಕನ್ನಡವನ್ನೇ ಮಾತನಾಡುತ್ತದೆ, ಕನ್ನಡವನ್ನು ಆರಾಧಿಸುತ್ತದೆ ಎಂಬುದವರರ್ಥ. ಹಾಗೆ ನೋಡಿದರೆ ಖಗ- ಮೃಗಗಳ ಆಡುಭಾಷೆಯೂ ಸಹ ಕನ್ನಡವೇ ಆಗಿದೆ. ಕಾಗೆ ಪ್ರಪಂಚದ ಎಲ್ಲಾ ದೇಶಗಳಲ್ಲೂ ಕಾಕಾ ಎನ್ನುತ್ತದೆ, ಹಸು ಅಂಬಾ ಎನ್ನುತ್ತದೆ, ಕೋಗಿಲೆ ಚಿಕ್ಕವ್ವ ಎನ್ನುತ್ತದೆ ಇವೆಲ್ಲವೂ...
Latest News

ಮಾಸದಲ್ಲೇ ಶ್ರೇಷ್ಠ ಕಾರ್ತಿಕ

ನಮ್ಮ ಶಾಸ್ತ್ರ-ಸಂಪ್ರದಾಯಗಳು ಕೇವಲ ಮನುಷ್ಯನ ಬದುಕಿನ ಸುತ್ತಲ ಪರಿಸರಕ್ಕಷ್ಟೆ ರೂಪುಗೊಂಡಿಲ್ಲ. ವಿಶ್ವದ ಗ್ರಹಗತಿಗಳ ಚಲನಗತಿಯನ್ನಾಧರಿಸಿ ನಮ್ಮ ಸಂಸ್ಕೃತಿ–ಆಚರಣೆಗಳು ಆವಿಷ್ಕಾರಗೊಂಡಿವೆ. ಮನುಷ್ಯನ ಬದುಕಿನೊಂದಿಗೆ ಜೀವರಾಶಿಗಳಲ್ಲದೆ ಸಕಲ ಗ್ರಹಚರಗಳು ಒಳಗೊಂಡಿವೆ ಎಂಬುದನ್ನು ನಮ್ಮ ಋಷಿಗಳು ಗ್ರಹಿಸಿದ್ದಾರೆ. ಮನುಷ್ಯನ ಹುಟ್ಟು ಬೆಳವಣಿಗೆಯೊಂದಿಗೆ ಗ್ರಹಗತಿಗಳ ಚಲನೆಯನ್ನು ಹೊಂದಿಸಿ ವಿಶ್ಲೇಷಿಸಿದ್ದಾರೆ. ಮನ್ವಂತರ-ಸಂವತ್ಸರಗಳ ಜೊತೆ ತಿಂಗಳು-ದಿನಮಾನಗಳು, ಗಂಟೆ-ನಿಮಿಷಗಳ ಎಣಿಕೆಯ ಮಧ್ಯೆ ಬರುವ ರಾಹು-ಯಮಗಂಡ-ಗುಳಿಕ ಕಾಲಗಳ ಗುಣಿತ ಯಾವ ಗಣಿತಶಾಸ್ತ್ರಕ್ಕೂ ಕಡಿಮೆಯದಲ್ಲ. ನಮ್ಮ ದೇಹಚಲನೆಯೊಂದಿಗೆ ಗ್ರಹಚಲನೆಗೂ ಸಂಬಂಧವಿದೆ. ಈ ಬ್ರಹ್ಮಾಂಡದಲ್ಲಿ ಚರಾಚರ ಎಲ್ಲವೂ ಸೃಷ್ಟಿಯೊಂದಿಗೆ ಪರಿಭ್ರಮಣೆಗೊಳಗಾಗಿವೆ ಎಂಬುದನ್ನು ವೈಜ್ಞಾನಿಕವಾಗಿ ರೂಪಿಸಿದ ಭಾರತೀಯ ಶಾಸ್ತ್ರಗಳು ಎಲ್ಲಾ ಕಾಲಕ್ಕೂ ಸಲ್ಲುವಂಥವು. ಭಾರತೀಯ ಶಾಸ್ತ್ರಸಂಪ್ರದಾಯದಲ್ಲಿ ಪ್ರತಿಯೊಂದಕ್ಕೂ ಅರ್ಥವಿದೆ. ಪ್ರತಿ ಸಮಯಕ್ಕೂ ಆದ್ಯತೆ ಇದೆ. ಪ್ರತಿ ಕ್ಷಣವೂ ಶಾಸ್ತ್ರಕಣದಲ್ಲಿ ಆವಿರ್ಭವಿಸಿ ಬರುತ್ತವೆ. ಹೀಗಾಗಿ ವರ್ಷದ ಪ್ರತಿ ತಿಂಗಳಲ್ಲೂ ವೈವಿಧ್ಯಮಯವಾದ ಆಚರಣೆಗಳು ಚಾಲನೆಯಲ್ಲಿವೆ. ಅವುಗಳನ್ನು ಪಾಲಿಸುವವರ ಮನದಲ್ಲಿ ಸಾರ್ಥಕ್ಯದ ಭಾವವಿರುತ್ತದೆ. ಅವರ ಬದುಕಲ್ಲಿ ನೆಮ್ಮದಿ...
Latest News

“ವೀರಯೋಧ” ಅವರ ಕಥೆಯನ್ನು ಅವರ ಮುಂದೆ ಅಭಿನಯಿಸಿದ್ದು…

ಇಷ್ಟು ದಿನಗಳಲ್ಲಿ ಅದೆಷ್ಟೋ ವಿದ್ಯಾರ್ಥಿಗಳು ಬಂದು ಹೋಗಿದ್ದಾರೆ. ಆದರೆ ಒಂದು ಬ್ಯಾಚ್ ನ ವಿದ್ಯಾರ್ಥಿಗಳಲ್ಲಿ ಕೆಲವು ವಿದ್ಯಾರ್ಥಿಗಳು ನನ್ನ ಹಿಂದೆಯೆ ಓಡಾಡಲು ಶುರುಮಾಡಿದ್ದರು. ಕಾರಣ ಇಷ್ಟೇ, ಅಷ್ಟು ಮಕ್ಕಳು ಒಂದಲ್ಲ ಒಂದು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದವರೇ ಆಗಿದ್ದರು. ನಾನೂ ಕೂಡ ಅಂತಹ ಚಟುವಟಿಕೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದೆ. ನಾನು ಕೂಡ ರಂಗಭೂಮಿಯಿoದ ಬಂದವನಾಗಿದ್ದರಿAದ ಒಂದಿಷ್ಟು ಸಲುಗೆ ಆ ವಿದ್ಯಾರ್ಥಿಗಳ ಗುಂಪಿನ ಜೊತೆಗಿತ್ತು. ಶಂತನು, ಶಶಾಂಕ್, ಗೌತಮ್, ಸಮರ್ಥ್ ಇವರುಗಳು ಪ್ರಮುಖರು. ‘ಪ್ರತಿಭಾಕಾರಂಜಿಯ ವಿಷಯ’. ಅದಕ್ಕೆ ಸಂಬoಧಿಸಿದ ಶಿಕ್ಷಕರಾಗಿ ನಾನು ಮತ್ತು ಹಿಂದಿ ಮೇಡಂ ಅಂಬುಜಾಕ್ಷಿ ಇದ್ದೆವು. ಬಹುತೇಕ ಈ ವಿದ್ಯಾರ್ಥಿಗಳೇ ಹೆಸರು ಕೊಟ್ಟಿದ್ದರು. ನಾಟಕ ಎಂದ ತಕ್ಷಣ ಇವರಿಗೆ ನಾನೇ ನೆನಪಾಗುತ್ತಿದ್ದೆ. ಈ ವಾನರ ಸೇನೆಯನ್ನು ಸೇರಿಸಿಕೊಂಡು ನಾಟಕವನ್ನು ಸಿದ್ಧಪಡಿಸಿದ್ದೂ ಆಯಿತು. ಪ್ರತಿಭಾ ಕಾರಂಜಿಯಲ್ಲಿ ಭಾಗವಹಿಸಿ ಅನೇಕ ಸ್ಫರ್ಧೆಗಳಲ್ಲಿ ಬಹುಮಾನವನ್ನು ಪಡೆದಿದ್ದಾಯಿತು. ಗೌತಮ್ ಸಾಂಸ್ಕೃತ ಧಾರ್ಮಿಕ ಪಠಣದಲ್ಲಿ...
1 6 7 8 9 10 24
Page 8 of 24
error: Content is protected !!