Davanagere

ಗುರುದಕ್ಷಿಣಿಗಾಗಿ ನನ್ನೆಲ್ಲಾ ಸ್ನೇಹಿತರೂ ಕೈಯ ಜೋಡಿಸಲಿ…. ..!!

ಇದುವೇ ಶಿಕ್ಷಕರ ದಿನಾಚರಣೆಗೆ ವಿದ್ಯಾರ್ಥಿಗಳಾಗಿ ನೀಡುವ ಕೊಡುಗೆ

ಇಂದು ನಮಗೆಲ್ಲ ಹುಟ್ಟಿನಿಂದ ಹಿಡಿದು ಸಾವಿನ ಕೊನೆಯ ಹಂತದವರೆಗೂ ಒಂದಲ್ಲಾ ಒಂದು ರೀತಿಯಲ್ಲಿ ತಮ್ಮದೇ ಆದ ಜೀವನದ ಪಾಠಗಳನ್ನ, ಮೌಲ್ಯಗಳನ್ನ ತಿಳಿಸಿದ ಶಿಕ್ಷಕ ವೃಂದದವರ ದಿನಾಚರಣೆ. ಕೆಲವು ಶಿಕ್ಷಕರು ನಮಗೆ ತಾಯಿ ರೂಪದಲ್ಲಿ, ಸ್ನೇಹಿತರ ರೂಪದಲ್ಲಿ, ತಂದೆ ರೂಪದಲ್ಲಿ, ಬಂದು ಬಳಗದವರ ರೂಪದಲ್ಲಿ ಪಾಠಗಳ ಹೇಳಿದ್ದಾರೆ. ಆದರೆ ಜೀವನದ ಶೈಲಿ ಹೀಗೆ ಇರಬೇಕು, ಇದೇ ರೀತಿಯಲ್ಲಿ ನಾವುಗಳು ನಡೆಯಬೇಕು ಎಂಬುದನ್ನು ನಾಲ್ಕು ಗೋಡೆಗಳ ನಡುವೆ ಅದಕ್ಕೆ ಪಾಠಶಾಲೆ ಎಂಬ ಅಡಿಬರಹವನ್ನು ನೀಡಿ ಶಿಕ್ಷಣ ನೀಡಿದ್ದಾರೆ. ಅಂತಹ ಪಾಠಶಾಲೆ ಇಂದು ಅದೆಷ್ಟೋ ಮಹಾನ್ ವ್ಯೆಕ್ತಿಗಳಿಗೆ ಆಶ್ರಯ ತಾಣವಾಗಿ, ಗುರಿ ಮುಟ್ಟಿಸುವ ಗುರುಕುಲವಾಗಿದೆ. ಅಂತಹ ಗುರುಕುಲದ ಮಹಾದ್ವಾರವನ್ನು ನಾನು ಮೊನ್ನೆ ಹಾಗೆ ಸುಮ್ಮನೆ ನೋಡಿದಾಗ, ನನ್ನ ಅದೃಷ್ಟಕ್ಕೆ ನಾನು ಧನ್ಯವಾದ ಹೇಳಿದಾಗ ಅದು, ಸಹಜವಾಗಿ, ಸಂತೋಷದಿಂದ ಸಂತೋಷಪಟ್ಟಿದ್ದೇನೆ.
ನಾನು ಮೊನ್ನೆ ನಮ್ಮ ಪತ್ರಿಕಾ ತಂಡದ ಸ್ನೇಹಿತರ ಒಡಗೂಡಿ, ಕೆ.ಆರ್. ಮಾರ್ಕೆಟ್ ಒಳಗಿರುವ ನೇತಾಜಿ ಸುಭಾಷ್ ಚಂದ್ರಬೋಸ್ ಸರ್ಕಾರಿ ಪ್ರೌಢ ಶಾಲೆಯ ಗೋಡೆಗಳ ಮತ್ತು ನಾಮಫಲಕಗಳ ಅದ್ಭುತ ನೋಟವನ್ನು ನೋಡಲು, ನನಗೆ ಅದೇನೋ ಕೋಟಿ ನೆನಪುಗಳ ಪುಸ್ತಕವ ಹೊಂದಿರುವ ಗ್ರಂಥಾಲಯವ ಹೊಂದಿದ ಭಾವನೆ ಮೂಡಿತು. ಅದರಲ್ಲಿ ಕೆಲವು ಸುಂದರ ನೆನಪುಗಳ ಮೆಲುಕು ಹಾಕುತ್ತವೆ. ಅದರಲ್ಲಿಯೂ ಅಂದು ನಮ್ಮ ಶಾಲೆಯಲ್ಲಿ ಸರಾಗವಾಗಿ ತಮ್ಮ ಎರಡು ಕೈಗಳಿಂದ ಹಾರ್ಮೋನಿಯಮ್ ನುಡಿಸುತ್ತ ತಮ್ಮ ಅದ್ಭುತ ಧನಿಯೊಂದಿಗೆ ನಮಗೆಲ್ಲ ಸಂಗೀತ ಹೇಳಿಕೊಡುತ್ತಿದ್ದ, ಕಲ್ಲಪ್ಪ ಅರಳಿ ಗುರುಗಳ ಮಾತು ಮತ್ತು ಅಂದು ಭುಜಕ್ಕೆ ತಟ್ಟಿ ಮಾತನಾಡಿದ್ದ ಭಂಗಿಯಂತೆಯೇ ಮೊನ್ನೆಯೂ ನನ್ನ ಭುಜಕ್ಕೆ ಕೈ ಹಾಕಿ ಮಾತನಾಡಿದ ರೀತಿ ಏನೋ ಒಂಥರಾ ಮನಸ್ಸಿಗೆ ತಂಪು ಎರೆಚಿದಂತಾಯಿತು. ಅಷ್ಟೇ ಅಲ್ಲದೇ ನಮ್ಮ ಡಿಇಡಿ ತರಬೇತಿಯಲ್ಲಿ ಬೋಧನೆ ಮಾಡಿದ ವಸಂತಕುಮಾರಿ ಶಿಕ್ಷಕರೇ ನಮ್ಮ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯರಾಗಿ ಬಂದಿರೋದು ನನಗೆ ಎಲ್ಲಿಲ್ಲದ ಸಂತೋಷ ತರಿಸಿ, ನನಗೆ ಹಳೆಯ ನೆನಪುಗಳ ಮೆಲುಕ ಹಾಕುವಂತೆ ಮಾಡಿತು.

filter: 0; fileterIntensity: 0.0; filterMask: 0; module:1facing:0;
hw-remosaic: 0;
touch: (-1.0, -1.0);
modeInfo: ;
sceneMode: Auto;
cct_value: 0;
AI_Scene: (6, -1);
aec_lux: 0.0;
hist255: 0.0;
hist252~255: 0.0;
hist0~15: 0.0;

ಅಂದು ನಮ್ಮ ಶಾಲೆಯ ಮುಂಭಾಗದಲ್ಲಿ ನಾನು ನನ್ನ ಸ್ನೇಹಿತರು ಮತ್ತು ಕೆಲವು ತರಗತಿ ವಿದ್ಯಾರ್ಥಿನಿಯರು ಸೇರಿ ನಮ್ಮ ಅಂದಿನ ಶಿಕ್ಷಕರ ಜೊತೆ ಅದರಲ್ಲೂ ನಮ್ಮ ಮುದ್ದಿನ ಪಿಟಿ ಮಾಸ್ಟರ್‌ರವರ ಜೊತೆ ಸ್ವಚ್ಚತೆ ಕಾರ್ಯ ಇಂದಿಗೂ ನೆನಪಿದೆ. ನಮ್ಮ ಶಾಲೆಗೆ ಸೌಂದರ್ಯವೆಂದರೆ ಮೃದುವಾದ ಹಚ್ಚ ಹಸಿರಿನ ಹುಲ್ಲು, ಅಂದು ನಮ್ಮ ಸ್ನೇಹಿತರ ಜೊತೆಗೆ ಸೇರಿ ಹಾಕಿದ್ದ ಗಿಡ-ಮರಗಳು , ಆ ಗಿಡಗಳಿಗೆ ಈಶ, ಸೊಟ್ಟ ಬಸ್ಯಾ (ರಘು), ರೇಖಾ, ರಮ್ಯ, ರಶ್ಮೀ, ಇಬ್ರಾಹೀಂ, ಅರುಣ, ಮಿಥುನ, ಪವನ, ಸುಹೀಲ್, ವಿನಯ್, ಶಶಿ ಜೊತೆ ಜಗಳ ಮಾಡಿಕೊಂಡು, ಕಾಲೆಳೆದುಕೊಂಡು, ಕ್ವಾಟಲೆ-ಕೀಟಲೆ ಮಾಡಿಕೊಂಡು ಹಾಕುತ್ತಿದ್ದ ನೀರಿನ ಜಗಳಗಳು ಇಂದಿಗೂ ನಮ್ಮ ತರಗತಿಯಿಂದ ನೋಡಬಹುದಾಗಿದೆ! ಇದು ನನ್ನನ್ನು ಅಷ್ಟೇ ಕೇವಲ ಭಾವಪರವಶಗೊಳಿಸದೆ, ನನ್ನ ಸ್ನೇಹಿತರೂ ಓದಿದರೆ ನಿಜಕ್ಕೂ ಆನಂದ ಭಾಷ್ಪ ತರಿಸಿಕೊಳ್ಳುವರು, ಅಲ್ಲದೇ ಎಲ್ಲರೂ ಮಿಸ್ ಯೂ ಡಿಯರ್ ಫ್ರೆಂಡ್ಸ್ ಎಂದು ಹೇಳುವರು, ಇಂದಿನ ಮೋದಿ ಯವರ ಸ್ವಚ್ಚತೆಯ ಕಾರ್ಯಕ್ರಮ ಸ್ವಚ್ಚ ಭಾರತ್ ಪರಿಕಲ್ಪನೆ ಅಂದೇ ನಮ್ಮ ಬಾಲ್ಯ ಮಿತ್ರರೊಂದಿಗೆ ಕೈ ಜೋಡಿಸಿದ್ದೆವು. ಅಂದು ನಮ್ಮ ಶಿಕ್ಷಕರು ಹೇಳುತ್ತಿದ್ದ ವಿಚಾರಗಳು ಇಂದಿನ ಸ್ವಚ್ಚತೆ ಕೇವಲ ಸುತ್ತಮುತ್ತಲಿನ ಪ್ರದೇಶದ ಸ್ವಚ್ಚತಾ ಅಭಿಯಾನಗಳಿಗೆ ಸೀಮಿತವಾಗದೆ, ಮನಸ್ಸಿನಲ್ಲಿ ಆಲೋಚನೆಗಳಲ್ಲಿ ವ್ಯವಸ್ಥೆಗಳಲ್ಲಿ ಸರ್ಕಾರಿ ಕಛೇರಿಗಳಲ್ಲಿ, ರಾಜಕಾರಣಗಳಲ್ಲಿ ಸ್ವಚ್ಚತೆಯೆಂಬ ನದಿಯೂ ಹರಿಯಬೇಕಾಗಿದೆ.
filter: 0; fileterIntensity: 0.0; filterMask: 0; module:1facing:0;
hw-remosaic: 0;
touch: (0.4361111, 0.4361111);
modeInfo: ;
sceneMode: Auto;
cct_value: 0;
AI_Scene: (-1, -1);
aec_lux: 0.0;
hist255: 0.0;
hist252~255: 0.0;
hist0~15: 0.0;
ಈ ಮಾತು ಓದುತ್ತಿರುವ ನಿಮಗೆ ಅದ್ಭುತವೆನಿಸಿದರೆ, ದಯಮಾಡಿ ನಾವು – ನೀವು ಓದಿದ ಸರ್ಕಾರಿ ಶಾಲೆಗಳನ್ನು ಉಳಿಸುವ ಸಣ್ಣ ಪ್ರಯತ್ನ ಮಾಡೋಣ. ಸರ್ಕಾರಿ ಶಾಲೆಗಳು ಜೇನುಗೂಡಿನ ಆಕಾರದಲ್ಲಿದ್ದು, ನಾವು ನೀವು ಒಟ್ಟಿಗೆ ಇದ್ದೂ ಬಾಳಿದರೆ ಸುಂದರವಾಗಿ ಜೇನುಗೂಡು ಕಾಣುತ್ತೆ, ಬಿಟ್ಟರೆ ಸರ್ಕಾರಿ ಶಾಲೆಗಳು ಜೇನುಗೂಡಿನಲ್ಲಿ ಮೂಡುವ ಕೊನೆಯ ಮುಳ್ಳುಗಳಾಗಿ ಪಾಳು ಬಿದ್ದ ಗೋಡೆಗಳಾಗಿ ಕಾಣುತ್ತವೆ. , ನಮ್ಮ ಶಿಕ್ಷಕರು ಅವರ ಕನಸುಗಳನ್ನು ಜೀವಂತವಾಗಿಸಿ ನಮ್ಮಲ್ಲಿ ನೋಡುತ್ತಿದ್ದರು. ಇಲ್ಲಿ ಅಧ್ಯಯನ ಮಾಡುವುದರಿಂದ ನಮಗೆ ಸಕಾರಾತ್ಮಕ ಭಾವನೆ ಬರುತ್ತದೆ, ನಾವು ಆನಂದಮಯ ಸ್ವರ್ಗದಲ್ಲಿದ್ದಂತೆ! ಅಂದು ಈ ಶಾಲೆಗಳಲ್ಲಿ ನಾನು, ನಮ್ಮ ತಂಗಿಯರು ಸೇರಿ ಎಸ್ ನಿಜಲಿಂಗಪ್ಪನವರಂತಹ ಮೇರು ವ್ಯೆಕ್ತಿಗಳೂ ಸಹ ಶಿಕ್ಷಣ ಕಲಿತಿದ್ದಾರೆ. ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡುವ ಶ್ರೇಷ್ಠ ನಾಯಕರುಗಳಾಗಿದ್ದಾರೆ. ಆದರೆ ಇಂದು ನಮ್ಮ ಶಾಲೆಗಳ ಸ್ಥಿತಿ ನೋಡಿದರೆ ನಮ್ಮ ಶಾಲಗೆಳ ನಾಮಫಲಕದ ಜೊತೆ ನಮ್ಮ ನೆನಪುಗಳು ಸಹ ಮರೆಯಾಗುತ್ತವೆಯೇ ಎಂಬ ಭಯ ಕಾಡುತ್ತಿವೆ. ಕಾರಣ ಶಾಲೆಯ ಸುತ್ತ-ಮುತ್ತಲೂ ಗಿಡಗಂಟೆಗಳ ಪೊದೆಗಳಿಂದ ಕೂಡಿರುವ ವಾತಾವರಣ ಸೃಷ್ಠಿಯಾಗಿದ್ದು, ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುವ ಪೋಷಕರೇ ಈ ಶಾಲೆಯ ಒಳಗೆ ಮೂತ್ರ ವಿಸರ್ಜನೆಯಿಂದ ಹಿಡಿದು ಎಲ್ಲಾ ಕರ್ಮಕಾಂಡಗಳ ಮಾಡಿ ಹೋಗುತ್ತಿದ್ದಾರೆ.
filter: 0; fileterIntensity: 0.0; filterMask: 0; module:1facing:0;
hw-remosaic: 0;
touch: (0.4361111, 0.4361111);
modeInfo: ;
sceneMode: Auto;
cct_value: 0;
AI_Scene: (6, -1);
aec_lux: 0.0;
hist255: 0.0;
hist252~255: 0.0;
hist0~15: 0.0;
ಇನ್ನು ಇದರ ಬಗ್ಗೆ ಗಮನ ನೀಡಬೇಕಾದ ಪ್ರಾಥಮಿಕ ಮತ್ತು ಪ್ರೌಢ ಶಾಲೆಯ ಉಪನಿರ್ದೇಶಕರುಗಳು, ಜಿಲ್ಲಾಡಳಿತ ಮತ್ತು ನಗರವನ್ನು ಶುಚಿತ್ವಗೊಳಿಸಿಬೇಕಾದ ಪಾಲಿಕೆಯೂ ಸೇರಿ ಯಾವೊಬ್ಬ ಮುಟ್ಟಾಳ್ ಮೂರ್ಖ ಶಿಖಾಮಣಿ ಅಧಿಕಾರಿಗಳು ಗಮನ ನೀಡದೆ, ಸೇವೆಗೆ ಸೇರಿರುವ ಶಿಕ್ಷಕರೇ ಅಲ್ಪ-ಸ್ವಲ್ಪ ಶುಚಿತ್ವ ಪಡಿಸಿಕೊಳ್ಳುವ ಸ್ಥಿತಿ ಒದಗಿದೆ. ಅಂದು ನಾವು ಓದುವ ಸಂದರ್ಭದಲ್ಲಿ ಶಿಕ್ಷೆಯ ಮೂಲಕ ಒಳ್ಳೆಯ ಪಾಠವ ಹೇಳುತ್ತಿದ್ದ ಶಿಕ್ಷಕರು ಇಂದಿನ ಮಕ್ಕಳಿಗೆ ಪಾಠವ ಹೇಳುವಲ್ಲಿ ಭಯ ಪಡುತ್ತಿದ್ದಾರೆ. ಕಾರಣ ಹೊಸ ಹೊಸ ನಿಯಮಗಳು ಶಿಕ್ಷಣ ಇಲಾಖೆಯ ಮತ್ತು ರಾಜಕಾರಣಿಗಳ ನಿಯಮ ಬದಲಾವಣೆಗಳು ಶಾಲೆಯಲ್ಲಿರಬೇಕಾಗಿದ್ದ ಭಾವೈಕ್ಯತೆಯ ಪಾಠಗಳು ಇಂದು ಮರೆಯಾಗಿ ಕೋಮುಗಲಭೆಗಳ ಧ್ವಂಧಗಳೇ ಹೆಚ್ಚಾಗಿವೆ. ಶಿಕ್ಷೆಯ ಮೂಲಕ ನಮ್ಮ ಗುರುಗಳು ಪಾಠ ಕಲಿಸುವರು ಎಂದರೆ ಮುಟ್ಟಾಳ ಪೋಷಕರ ವರ್ತನೆಗಳಿಂದ ಕಲಿಕೆಯಲ್ಲಿ ಕುಂಠಿತಗೊಂಡಿವೆ. ಶಾಲೆಯ ಮುಂದೆ ಸ್ವಚ್ಚತೆ ಮಾಡುವವರಿಲ್ಲದೆ, ಗಿಡ ಮರಗಳ ಬೆಳಸುವವರಿಲ್ಲದೆ, ಶಿಕ್ಷಕರ ಮಾತುಗಳನ್ನು ಪಾಲಿಸುವವರಿಲ್ಲದೆ ಸಮಾಜಕ್ಕೆ ಹೊರೆಯಾಗುತ್ತಿರುವ ವಾತಾವರಣ ನಿರ್ಮಾಣವಾಗುತ್ತಿದೆ. ಇದರಿಂದಾಗಿ ಇಂದು ಅದೇಷ್ಟೋ ಸರ್ಕಾರಿ ಶಾಲೆಗಳು ಮುಚ್ಚುತ್ತಿವೆ. ೨೦೧೮ರಲ್ಲಿಯೇ ಡೆಕ್ಕಾನ್ ಹೆರಾಲ್ಡ್ ದಿನಪತ್ರಿಕೆಯಲ್ಲಿ ಒಟ್ಟು ಸರಿ ಸುಮಾರು ೩೦-೫೦ ಸರ್ಕಾರಿ ಶಾಲೆಗಳು ಮುಚ್ಚಿ ಹೋಗಿರುವುದನ್ನು ವರದಿ ಮಾಡಿತ್ತು. ಇದೇ ರೀತಿ ಒಂದೊಂದೇ ಶಾಲೆಗಳನ್ನು ಮುಚ್ಚಿದರೆ ಮುಂದೊಂದು ದಿನ ಅವಕಾಶವಂಚಿತರ ಮಕ್ಕಳಿಗೆ ಮತ್ತು ಬಡಪಾಯಿ ಪೋಷಕರ ಮಕ್ಕಳ ಬದುಕು-ಭವಿಷ್ಯದ ಬಾಗಿಲು ಮುಚ್ಚಿ ಹೋಗುತ್ತದೆ. ಆದ್ದರಿಂದ ಸರ್ಕಾರಿ ಶಾಲೆಗಳನ್ನು ಉಳಿಸಿಕೊಳ್ಳಲು ನಾವು-ನೀವೂ ಶ್ರಮ ಪಡಬೇಕಿದೆ. ಇನ್ನು ಕೊನೆಯದಾಗಿ ನನ್ನೆಲ್ಲಾ ಹಳೆಯ ಶಾಲಾ ಮಿತ್ರರಿಗೆ ಹೇಳುವುದೇನೆಂದರೆ, ಸರ್ಕಾರಿ ಶಾಲೆಗೆ ಸರ್ಕಾರವೇ ಅನುದಾನ ಬಿಡುಗಡೆಗೊಳಿಸಿ ಉದ್ಧಾರ ಮಾಡಬೇಕೆಂಬ ನಿಯಮವೇನಿಲ್ಲ, ನಾನು-ನೀವುಗಳು ಸೇರಿ ಶಾಲೆಯ ವಾತಾವರಣವನ್ನು ಬದಲಾಯಿಸಿ, ಈ ತರಹ ಅಧಿಕಾರಿಗಳಿಂದ ನಿರ್ಲಕ್ಷ್ಯಗೊಳಪಟ್ಟ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಓದಿರುವ ಹಳೆಯ ವಿದ್ಯಾರ್ಥಿಗಳು ಸೇರಿ ಕೈಲಾದಷ್ಟು ಸೇವೆಯ ಮಾಡಿ ಶಾಲೆಯ ಉಳಿಸಿಕೊಳ್ಳುವಂತೆ ಮಾಡುವ ಪ್ರೇರೇಪಣೆ ಮಾಡುವ ಕೆಲಸವ ಮಾಡೋಣ, ಜೊತೆಯಲ್ಲಿ ಹೆಣ್ಣುಮಕ್ಕಳು ಸಮಾಜಕ್ಕೆ, ಮನೆಗೆ ಪುರುಷನಿಗೆ ಹೊರೆ ಎಂದು ಭಾವಿಸುವ ಬದಲು ಹೆಣ್ಣು ಮನೆಯ ಹೊರಗೆ-ಒಳಗೆ ಜವಾಬ್ದಾರಿಯನ್ನು ಹೊತ್ತು ಸಮಾಜದ ಬದಲಾವಣೆಗೆ ನೇರ ಪಾಲುದಾರರಳಾಗಿರುವ ಹೆಣ್ಣನ್ನು ಗೌರವಿಸಿ, ಹೆಣ್ಣುಮಕ್ಕಳಿಗೆ ಶಿಕ್ಷಣ ಕಲಿಸಲು ಪ್ರೋತ್ಸಾಯಿಸಿ ಎಂಬುದೇ ನನ್ನಯ ಆಶಯ.

ಲೇಖನ : ಸೂರ್ಯಪ್ರಕಾಶ್.ಆರ್, ಸಂಪಾದಕರು, ದಾವಣಗೆರೆ

error: Content is protected !!